ಆತ್ಮ ಮತ್ತು ಸಾಕ್ಷಿ

ಪ್ರೀತಿ ದ್ವೇಷದ ರಹಸ್ಯಗಳು
ಆತ್ಮವನ್ನು ಕುಟುಕಿದ ನಿಗೂಢಗಳು
ಪಾತಾಳಕ್ಕೆ ಕುಸಿಯುವ ಕನಸುಗಳು
ಕ್ಷಣ ಕ್ಷಣಕ್ಕೂ ಬೆತ್ತಲಾಗುತ್ತಿರುವ
ಪಾಪ ತುಂಬಿದ ಆತ್ಮಗಳು

ಅಲೆಮಾರಿ ಮೋಡಗಳು
ಪಾಪಾತ್ಮಗಳನ್ನು ತೊಳೆಯಲು
ಮಳೆಯನ್ನು ತರಲಿಲ್ಲ
ಕಲಬೆರಿಕೆ ಕನಸುಗಳು
ಭೂಮಿ ಸೂರ್‍ಯರು ಸಂಧಿಸುವ
ಸುಂದರ ಸಂಜೆಯಲಿ
ಮಲೀನವಾದ ಹೃದಯಗಳ
ಮುಸುಕನ್ನು ಸರಿಸದೇ ಹೋದವು.

ಮುಸುಕು ಸರಿಸಿ ಇಣುಕಿದರೆ
ಮುಳುಗುತ್ತಿರುವ ಸೂರ್‍ಯ.
ಕೆಂಪು ರಕ್ತದ ಮಡುವಿನಲಿ
ಕೊಲೆಯಾಗಿ ಬಿದ್ದಿದ್ದನು,
ಎಂತಹ ಸಾವು ಸೂರ್ಯನದು,
ಸಾಕ್ಷಿಗಳಿಲ್ಲ, ಸತ್ತ ಶವಕ್ಕೆ
ಅಳುವ ವಾರಸುದಾರರಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾರನೆ ಶ್ರೀರಾಮ
Next post ‘ಆಹಾ…! ಬಣ್ಣದ ಚಿಟ್ಟೆ’

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys